ಭಾನ್ ಗರ್. ದೆವ್ವದ ಕೋಟೆ ಎಂದೇ ಪ್ರಸಿದ್ಧಿ ಪಡೆದಿರುವ ಭಾನ್ ಗರ್ ಕೋಟೆಯು ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿದೆ. 17ನೇ ಶತಮಾನದಲ್ಲಿ ಅಂದರೆ 1573 ರಿಂದ 1631ರ ಒಳಗೆ ರಜಪೂತರ ಕಾಲಘಟ್ಟದಲ್ಲಿ ಕಲ್ಲು ಮತ್ತು ಇಟ್ಟಿಗೆಯ ಸಹಾಯದಿಂದ ಕಟ್ಟಲಾದ ಕೋಟೆಯಾಗಿದೆ. ಈಗ ಇದನ್ನು ಮಿಹಿರ್ ನಗರದ ಸರ್ಕಾರವು ತನ್ನ ವಶದಲ್ಲಿರಿಸಿ ಕೊಂಡಿದೆ.
ಈ ಕೋಟೆಯ ಸುತ್ತ ಮುತ್ತಾನೇ ದೊಡ್ಡ ದೊಡ್ಡ ಬೆಟ್ಟ ಹಾಗೂ ನೈಸರ್ಗಿಕವಾಗಿ ಸ್ರಷ್ಟಿಯಾದ ಜಲಪಾತಗಳು ನಿಮಗೆ ಕಾಣಸಿಗುತ್ತದೆ.
ಸ್ನೇಹಿತರೇ, ನೀವೂ ಇಲ್ಲಿಗೆ ಭೇಟಿ ನೀಡಬೇಕಂದರೆ ಸೂರ್ಯೋದಯದಿಂದ ಸೂರ್ಯಾಸ್ತದ ಒಳಗೆ ಬರಬೇಕು. ಯಾಕೆಂದರೆ, ಕತ್ತಲು ಆವರಿಸುತ್ತಿದ್ದಂತೆಯೇ ಈ ಕೋಟೆಗೆ ಬೀಗ ಬೀಳುತ್ತದೆ. ಅಲ್ಲಿನ ಸರ್ಕಾರವು ಜನರ ರಕ್ಷಣೆ ಮತ್ತು ಭದ್ರತೆಗಾಗಿ ಸಂಜೆಯ ಮೇಲೆ ಯಾರಿಗೂ ಕೋಟೆಯ ಒಳಗೆ ಅನುಮತಿ ಕೊಡುವುದಿಲ್ಲ. ಆದರೆ ಪ್ಯಾರಾ ನಾರ್ಮಲ್ ಇನ್ವೆಸ್ಟಿಗೇಟರ್ಸ್ ಹಾಗೂ ಕೆಲವು ರಿ – ಸರ್ಚರ್ಸ್ ಗಳಿಗೆ ಮಾತ್ರ ಅವಕಾಶವಿದೆ.
ಬ್ಲ್ಯಾಕ್ ಮ್ಯಾಜಿಕ್ ಅಥವಾ ಮಾಟ – ಮಂತ್ರಗಳಿಂದ ಈ ಕೋಟೆಯನ್ನು ನಾಶ ಮಾಡಲಾಗಿದೆ ಎಂದು ಕೆಲ ತಜ್ಞರು ಹೇಳುತ್ತಾರೆ. ಆದರೆ ಈ ಕೋಟೆಯು ಈಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಬೆಳಿಗ್ಗೆ ಯಿಂದ ಸಂಜೆಯವರೆಗೂ ಇಲ್ಲಿ ಜನರ ಓಡಾಟ ಹೆಚ್ಚಿರುತ್ತದೆ. ಕತ್ತಲಾಗುತ್ತಿದ್ದಂತೆಯೇ ಯಾರೂ ಕೂಡ ಇಲ್ಲಿ ಓಡಾಡುವ ಧೈರ್ಯ ಮಾಡುವುದಿಲ್ಲ. ಇಲ್ಲಿಯ ಜನರ ಪ್ರಕಾರ ರಾತ್ರಿ ವೇಳೆಯಲ್ಲಿ ಈ ಕೋಟೆ ಒಳಗಿಂದ ಅತೃಪ್ತ ಆತ್ಮಗಳು ನಡೆದಾಡುವ ಶಬ್ದ ಹಾಗೂ ಜೋರಾಗಿ ನಗುವ ಶಬ್ದಗಳು ಕೇಳಿ ಬರುತ್ತವೆ ಎಂದು ಹೇಳುತ್ತಾರೆ.

ಕೆಲ ವರ್ಷಗಳ ಹಿಂದೆ ಪ್ಯಾರಾ ನಾರ್ಮಲ್ ಇನ್ವೆಸ್ಟಿಗೇಟರ್ ಒಬ್ಬರು, ಕೆಲವು ಎನರ್ಜಿ ಡಿಟೆಕ್ಟ್ ಮಾಡುವ ಸೆನ್ಸಾರ್ ಗಳ ಜೊತೆ ಇಲ್ಲಿಗೆ ತೆರಳಿದ್ದರು. ಅವರ ಪ್ರಕಾರ ಅವರ ಬಳಿಯಿದ್ದ ಕ್ರಿಸ್ಟಲ್ ಬಾಲ್ ಹಾಗೂ ಯೂನಿವರ್ಸಲ್ ಸ್ಕ್ಯಾನರ್ ಎನ್ನುವ ಉಪಕರಣಗಳಲ್ಲಿ ಕೆಲವು ಸ್ಪಿರಿಟ್ ಗಳು ಇಲ್ಲಿ ಚಲಿಸುತ್ತಿರುವ ವೇವ್ಸ್ ಫಾರ್ಮ್ ಆಗಿದೆ ಎಂದು.
ಭಾನ್ ಗರ್ ಕೋಟೆಯ ಬಳಿಯಲ್ಲಿರುವ ಗೋಲಾಕವಾಸ್ ಎನ್ನುವ ಹಳ್ಳಿಯ ಜನರು ಈ ಕೋಟೆಯ ಹೆಸರು ಕೇಳುತ್ತಿದ್ದಂತೆಯೇ ಅಲ್ಲಿಂದ ಓಡಿ ಹೋಗುತ್ತಾರೆ. ಅಷ್ಟೇ ಅಲ್ಲ, ಕೆಲವರು ಆ ಕೋಟೆಯಲ್ಲಿ ದೆವ್ವಗಳ ಇರುವಿಕೆಯನ್ನು ಅನುಭವ ಮಾಡಿದ್ದಾರೆ ಇನ್ನೂ ಕೆಲವರು ದೆವ್ವಗಳನ್ನು ನೋಡಿ ಮನೆ ಖಾಲಿ ಮಾಡಿಕೊಂಡು ಹೋದ ಘಟನೆಗಳು ಇವೆ. ಆ ಊರಿನ ಜನರ ಪ್ರಕಾರ ಆ ಕಾಲದಲ್ಲಿ ವಾಸವಿದ್ದ ರತ್ನಾವತಿ ಹಾಗೂ ತಾಂತ್ರಿಕನ ಆತ್ಮ ಇಂದಿಗೂ ಆ ಕೋಟೆ ಒಳಗೆ ಸುತ್ತುತ್ತಿವೆ.
ದೂರ ದೂರದ ಊರಿನಿಂದ ಪ್ರವಾಸಿಗರು ಈ ಕೋಟೆಯನ್ನು ಹಾಗೂ ಅದರ ಸುತ್ತ ಮುತ್ತ ಇರುವ ಪಾಳು ಬಿದ್ದ ಬಂಗಲೆಯನ್ನು ನೋಡಲು ಬರುತ್ತಾರೆ. ಇಲ್ಲಿನ ಪಂಡಿತರ ಪ್ರಕಾರ ಆ ಕಾಲದಲ್ಲಿ ವಾಸವಿದ್ದ ರಾಣಿ ರತ್ನಾವತಿ ಮತ್ತು ಸಿಂಧ್ಯಾ ಎಂಬ ತಾಂತ್ರಿಕನ ನಡುವೆ ನಡೆದ ತಂತ್ರ ವಿದ್ಯೆಯ ಯುದ್ಧದಿಂದ ಒಂದೇ ರಾತ್ರಿಯಲ್ಲಿ ಇಡೀ ಊರಿಗೆ ಊರೇ ನಾಶವಾಯಿತು. ಇಂದಿಗೂ ಇಲ್ಲಿನ ಜನರಿಗೆ ಹಿಂಸಾತ್ಮಕ ಅನುಭವವಾಗುತ್ತಿದೆ ಎಂದು ಹೇಳುತ್ತಾರೆ.
ನಾವಿಲ್ಲಿ ಯಾವುದೇ ರೀತಿಯ ಅಂಧವಿಶ್ವಾಸವನ್ನು ಬೆಳೆಸುತ್ತಿಲ್ಲ. ಬದಲಾಗಿ ಇಲ್ಲಿನ ಜನರ ಅಭಿಪ್ರಾಯವನ್ನು ಹಾಗೂ ಕೆಲ ವೈಜ್ಞಾನಿಕ ಕಥೆಗಳನ್ನು ಒಟ್ಟುಗೂಡಿಸಿ ನಿಮ್ಮ ಮುಂದಿಡುತ್ತಿದ್ದೇವೆ ಅಷ್ಟೇ.